ಅವನಿ
ಸನಾತನ, ಆದರ್ಶ, ಕಾಳಜಿ ಮತ್ತು ಅಚ್ಛೇ ದಿನ್ ಎಂಬ ನಾಲ್ಕು ವಿಭಾಗಗಳನ್ನು ಒಳಗೊಂಡ ಕೃತಿ #ಅವನಿ
ಲೇಖಕರು – ರಾಹುಲ್ ಹಜಾರೆ
ಪುಸ್ತಕದ ಕುರಿತಂತೆ ಓದುಗರ ಒರ್ವರ ಅಭಿಪ್ರಾಯ:
~ಸನಾತನಿ ಎಂದು ಬರೆದುಕೊಂಡ ನಾವು ಸನಾತನಕ್ಕೆ ಬೆಲೆ ಕೊಡದೇ ಎಲ್ಲಿ ಎಡವುತ್ತಿದ್ದೇವೆ, ಯಾರು ನಮ್ಮನ್ನ ಎಡವುವಂತೆ ಮಾಡುತ್ತಿದ್ದಾರೆ/ಮಾಡಿದ್ದಾರೆ, ಮೌಢ್ಯ ಎಂಬ ಹಣೆಪಟ್ಟಿಗೆ ವೈಜ್ಞಾನಿಕತೆಯೇ ಬಲಿಯಾದದ್ದು!;
~ನಮ್ಮಲ್ಲಿ ಗುಣಗ್ರಾಹಿತ್ವದ ಕೊರತೆಯೇಕಿದೆ ಮತ್ತು ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು; ಎಲ್ಲರನ್ನೂ, ಎಲ್ಲವನ್ನೂ ಮೈಕ್ರೋಸ್ಕೋಪ್ ಅಡಿಗಿಟ್ಟು negative ಹುಡುಕುವ ಗುಣವೇಕೆ? ; ನಿಸ್ವಾರ್ಥ ಸೇವೆಯ ಖುಷಿ; ಹೊಲಸು ಕೆಸರೆರೆಚಾಟದ ರಾಜಕೀಯ; ರಾಜಕೀಯದಲ್ಲಿನ ಅಹಮ್ಮು; ವತ್ಸಲೆಯ ವತ್ಸರ ಕಾರ್ಯ-ಕೈಂಕರ್ಯ; ಸಮ್ಮೇಳನದ ಶಕ್ತಿ; ಪ್ರಧಾನ ಸೇವಕನ ಪ್ರೇರಣಾದಾಯಿ ವ್ಯಕ್ತಿತ್ವ;
~ನಮ್ಮ ಕಾಳಜಿ ನಮ್ಮೆಡೆಗೆ, ದೇಶದೆಡೆಗೆ ಹೇಗಿರಬೇಕು, ಅದನ್ನು ಹೇಗೆ ಪ್ರಚುರಪಡಿಸಬೇಕು; ಮದವೇರಿದಾಗ ಅಂಕುಶದಿಂದ ತೀಡಿ ಸರಿದಾರಿಗೆ ತರುವುದು ಹೇಗೆ; ಸೈದ್ಧಾಂತಿಕತೆಯಲ್ಲಿ ವೈಚಾರಿಕತೆಯಲ್ಲಿ ವೈಶಾಲ್ಯತೆ ಮತ್ತು ತಾರ್ಕಿಕತೆ; ಯಾರು, ಎಲ್ಲಿ, ಹೇಗೆ ಮಾತನಾಡಬೇಕು; ಸಿನಿಮಾ, ನಟ, ನಟಿ, ಅಂಧಾಭಿಮಾನ, ಮಾಧ್ಯಮ, ಟಿಆರ್ಪಿ ಹಪಹಪಿ; ಕಿರುಕುಳ ಸಂಬಂಧಿ ಅಭಿಯಾನವೇ ಇನ್ನೊಂದು ಕಿರುಕುಳಕ್ಕೆ ದಾರಿಮಾಡದಿರಲಿ; ಕಾಟಾಚಾರದ್ದಾಗದಿರಲಿ ಕನ್ನಡ ಪ್ರೇಮ; ಔರಂಗಜೇಬನೇ ಬೇಕು ಕಾಂಗ್ರೆಸ್ಸಿಗೆ ಕಲಾಮ್ ಅಲ್ಲ; ‘ಕೈ’ ಕುಟುಂಬ ರಾಜಕಾರಣ; ಎಳೆ ಮನಸ್ಸಿನಲ್ಲಿ ರಾಷ್ಟ್ರೀಯತೆಯ ಬೀಜ;
~ಅಂಧಾಭಿಮಾನ ಇಲ್ಲದೇ ಮೋದಿಯವರ ಸಾಧನೆಯೇನು, ಮೋದಿಯವರ ಆದರ್ಶಪ್ರಾಯ ರಾಜಕಾರಣ, ಮೋದಿ ನೆ ಕ್ಯಾ ಕಿಯಾ ಹೈ ಅನ್ನೋರಿಗೆ ಉತ್ತರ, ಮೋದಿ ದೂರದೃಷ್ಟಿ, ಅಚ್ಛೇ ದಿನ್ ಹೀಗೆ ಬೇರೆ ಬೇರೆ ಬಗ್ಗೆ ವಿಷಯಗಳ ಬಗ್ಗೆ ವಿವರವಾಗಿ ತಿಳಿಸಿರುವ ಎಲ್ಲರೂ ಓದಬೇಕಾದ ಪುಸ್ತಕ ಅವನಿ.
ಪುಸ್ತಕ ಬೇಕಾದವರು ಕೆಳಗಿನ ಸಂಪರ್ಕ ಸಂಖ್ಯೆಗೆ ಕರೆಮಾಡಿ ತರಿಸಿಕೊಳ್ಳಬಹುದು.
ಅಂಚೆ ವೆಚ್ಚ ಪ್ರತ್ಯೇಕ.
ಪುಸ್ತಕ ಓದಿದ ಬಳಿಕ ನಿಮ್ಮ ಅಭಿಪ್ರಾಯ ತಿಳಿಸಿ.